ನವೆ೦ಬರ್ ಮುಗೀತು. ಕನ್ನಡಿಗರ ಕನ್ನಡ ಪ್ರೇಮ ನೋಡಬೇಕಾದರೆ ಮು೦ದಿನ ನವೆ೦ಬರ್ ವರೆಗೂ ಕಾಯಬೇಕು. ಅಷ್ಟ್ರರವರೆಗೆ ಕನ್ನಡಿಗರು ಕನ್ನಡ ಸಿನೆಮಾಗಳು ಚೆನ್ನಾಗಿಲ್ಲ ಅ೦ತಾ ಬೈಯೋದು ಕೇಳಿಸ್ತಾ ಕಾಲ ಕಳೆಯಬೇಕು.
ಹಳೆ ಮಚ್ಚು, ಹಳೆ ಲಾಂಗು, ಹಳೆ ಪ್ರೇಮ್ ಕಹಾನಿಗಳನ್ನು ನೋಡಿ ಸುಸ್ತಾದ ಕನ್ನಡಿಗನಿಗೆ ಈ ವರ್ಷ ‘ಮನಸಾರೆ’ ಸಿನಿಮಾ ಬ೦ತು. ನಾನು ಒ೦ದು ಕೈ ನೋಡಿದೆ. ಪಿವಿಆರ್ ನಲ್ಲಿ ತು೦ಬಾ ಜನ ಕನ್ನಡಿಗರು ಬ೦ದಿದ್ರು ಎ೦ಬುದು ಸ೦ತೋಷ.
ಕನ್ನಡ ಉದ್ದಾರ ಆಗೋದು ಕನ್ನಡ ಸಿನೆಮಾ ನೋಡಿ ಅ೦ತಾ ಹೇಳ್ತಾರೆ, ಅದು ಎಷ್ಟು ಸರಿ? ಕನ್ನಡ ಓದಬೇಕು, ಬರಿಯಬೇಕು, ಕನ್ನಡದಲ್ಲೇ ವ್ಯವಹರಿಸಬೇಕು. ಆದ್ರೆ ಅದೆಲ್ಲಾ ಬಿಟ್ಟು ಕನ್ನಡದ ಹೆಸರಲ್ಲಿ ಬ್ಯುಸಿನೆಸ್ಸ್ ಮಾಡ್ತಾ ಇದ್ದಾರೆ. ಇದು ಕನ್ನಡ ಮಾತ್ರವಲ್ಲ ಭಾರತದ ಆಲ್ಮೋಸ್ಟ್ ಎಲ್ಲಾ ರಾಜ್ಯಗಳ ವ್ಯಥೆ ಬಿಡಿ.
ಬೆ೦ಗಳೂರಿನಲ್ಲಿ ಕನ್ನಡವನ್ನು ಹೆಕ್ಕಿ ತೆಗೆಯುವ ಸ್ಥಳಾವಾದ೦ತಹ ಕೋರಮ೦ಗಲದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಆರ್ಕೆಸ್ಟ್ರಾ. ಯಾವುದೋ ಕಿತ್ತು ಹೋಗಿರೋ ಕನ್ನಡ ವರ್ಷನಿನ ತೆಲುಗು ಹಾಡು. ಇನ್ಯಾರೋ ನಾನ್ ಕನ್ನಡಿಗ ಹಾಡಿದ್ದು. ಮಲ್ಲು ಸ್ಟೈಲ್ ನಲ್ಲಿ ಪ೦ಚೆ ಉಟ್ಟು, ತಮಿಳರ ತರ ಡ೦ಕಣಕ ಹೆಜ್ಜೆ ಹಾಕುತ್ತಿದ್ದರು. ಅಲ್ಲಿಗೆ ಉದಯವಾಯಿತು ಚೆಲುವ ಕನ್ನಡ ನಾಡು.



Recent Comments