ಕತೆ ಬೇಕು
ಕತೆಯೊ೦ದು ಕೇಳಬೇಕು
ಅಜ್ಜಿಯ ಹತ್ತಿರವೊ೦ದು ಕತೆ ಕೇಳಬೇಕು
ಮಗುವಿನಿ೦ದ ಅಜ್ಜನವರೆಗೂ
ಎಲ್ಲರಿಗೂ ಕತೆ ಬೇಕು
ಕಾಲಕ್ಷೇಪವಾಗಬೇಕು
ದುಗುಡ ದೂಡಬೇಕು
ಕತೆಯಲ್ಲೊ೦ದು ನಾಯಕನಿರಬೇಕು
ಅವನಿಗೊ೦ದು ಗುರಿ ಇರಬೇಕು
ಹಾಗೋ ಹೀಗೋ ಕತೆಯಲ್ಲಿ
ತನ್ನನ್ನು ಕಾಣಬೇಕು.
ಕತೆಯಲ್ಲಯೊ೦ದು ಖಳನಿರಬೇಕು.
ಅವನನ್ನು ನಖಶಿಖಾ೦ತ
ದ್ವೇಷಿಸಬೇಕು.
ಅವನಿಲ್ಲದಿದೆ ಅರ್ಥವಿಲ್ಲ
ಅವನಿದ್ದು ನಿದ್ದೆ ಇಲ್ಲ
ಆತನ ಜತೆ ಗುದ್ದಾಟವೇ
ಕಥೆಯ ಉದ್ದೇಶ,
ಜೀವನದ ಉದ್ದೇಶ
ಒ೦ದನೂದು ಕಾಲದಲ್ಲಿ
ಇ೦ದ್ರನಿದ್ದ, ದೇವತೆಗಳಿದ್ದರು
ಆಗಾಗ್ಗೆ ರಾಕ್ಷಸರು ಎದ್ದು ಬರುತ್ತಿದ್ದರು
ಯಿನ್-ಯಾ೦ಗ್ ನ೦ತೇ
ತಿರುಗುತ್ತಿತು ತಕ್ಕಡಿಯಾಟ.
ಸಮತೋಲನಕ್ಕಾಗಿ
ಹಾತೊರಿಯುತ್ತಿತ್ತು ಈ ಭೂಮಿ
ಪಾಪ ಪುಣ್ಯಗಳ
ಪೆ೦ಡುಲಮ್
ಒಮ್ಮೆ ಆ ಬದಿಗೆ
ಇನ್ನೊಮ್ಮೆ ಈ ಕಡೆಗೆ.
ಕಾಲ ಕಳೆದು
ವೇಷ ಬದಲಿಸಿ ರಾಮ ಕೃಷ್ಣ, ಶಿವ ಬ೦ದ
ಜತೆಗೂ ಶಕ್ತಿಶಾಲಿ
ವಿಧ-ವಿಧದ ದೈತ್ಯರು ಬ೦ದರು
ಖಳ ಬಲಾಢ್ಯಗೊ೦ಡಷ್ಟೂ
ನಾಯಕನೂ ನೂರು ಪಟ್ಟು
ವಿಜೃ೦ಬಿಸಿದ
ಪಾತ್ರಧಾರಿಗಳು ಪ್ರಶ್ನಾತೀತರಾದರು.
ದೇವರಾದರು.
ಮನದೊಳಗೆ ಸೆರೆಯಾದರು.
ಮನುಜರನ್ನು
ಸೆರೆಯಾಗಿಟ್ಟರು.
ಬಾಯಿ೦ದ ಕಿವಿಗೆ
ತಲೆಯಿ೦ದ ತಲೆಗೆ
ತಲೆತಲಾ೦ತರ
ಕತೆಗೆ ಜೀವ ಬ೦ದು
ಉಸಿರಾಡತೊಡಗಿತು
ಉಸಿರೇ ಆಯಿತು.
ದ೦ಡೆತ್ತಿ ಬ೦ದವರೆಲ್ಲಾ
ಖಳರಾದರು
ನಾವು ಅವರು ಎ೦ಬ೦ತೆ
ಪಾಲು ಮಾಡಿಕೊ೦ಡು
ನಾಯಕರ ಪರ ನಾವಾಗಿ
ಪರರೆಲ್ಲಾ ಖಳನಾಯಕರಾಗಿ
ಗೆದ್ದೆತ್ತಿನ
ಬಾಲ ಹಿಡಿದೆವು
ತಮ್ಮಿಷ್ಟವಾಗದವರೆಲ್ಲ
ಎದುರಾಳಿಯಾಳಾಗಿ
ನಾವು
ಕುರಿ ಮ೦ದೆಯಾದೇವು
ಎಲ್ಲರಿಗೂ ಕತೆಬೇಕು
ಕತೆಯಲ್ಲಿ ಎದುರಾಳಿಯನ್ನು
ಚಚ್ಚಬೇಕು
ತರ್ಕಗಳನ್ನು ಬದಿಗಿಟ್ಟು
ಕತೆ ಒಪ್ಪಬೇಕು
ಎಲ್ಲರಿಗೂ ಕತೆಬೇಕು
ಸುಳ್ಳಿನ ಕ೦ತೆಗಳಾದರೂ
ಕತೆಬೇಕು
ಕಣ್ಮುಚ್ಚಿ ನ೦ಬಬೇಕು